ಮುಂಡಗೋಡ: ಕಾಂಗ್ರೆಸ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ವತಿಯಿಂದ, ದಿನಾಂಕ 30-06-2026 ರಂದು ಮಂಗಳವಾರ ಮಧ್ಯಾಹ್ನ 2:00 ಗಂಟೆಗೆ ಸರ್ಕಾರಿ ಆಸ್ಪತ್ರೆಯ ಎದುರುಗಡೆ ಇರುವ ಗಣಪತಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ SIR ಸಂಬಂಧಪಟ್ಟಂತೆ ಮುಂಡಗೋಡದಲ್ಲಿ ಸಭೆಯನ್ನು ಹಮ್ಮಿಕೊಂಡಿದ್ದು ಈ ಸಭೆಗೆ SIR ನ ಜಿಲ್ಲಾ ಉಸ್ತುವಾರಿಗಳು ಹಾಗೂ ಶಿರಸಿ ಸಿದ್ದಾಪುರ್ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಭೀಮಣ್ಣ ನಾಯಕರವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಲಿದ್ದಾರೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಶಿವರಾಮ ಹೆಬ್ಬಾರ್ ಅವರು ಮಾಜಿ ಶಾಸಕರಾದ ಶ್ರೀ ವಿ ಎಸ್ ಪಾಟೀಲ್ ರವರು ಮತ್ತು ಕೆಪಿಸಿಸಿ ಸದಸ್ಯರಾದ ಶ್ರೀ ವಿವೇಕ್ ಹೆಬ್ಬಾರ್ ಅವರು ಈ ಸಭೆಯಲ್ಲಿ ಹಾಜರಿರುತ್ತಾರೆ. ಹಾಗಾಗಿ ವೋಟರ್ ಲಿಸ್ಟ್ ವಿಶೇಷ ತೀವ್ರ ಪರಿಷ್ಕರಣೆ (SIR) ವಿಷಯಕ್ಕೆ ಸಂಬಂಧಪಟ್ಟಂತೆ ಮುಂಡಗೋಡ ತಾಲೂಕಿನ 16 ಗ್ರಾಮ ಪಂಚಾಯತ್ ಮತ್ತು ಪಟ್ಟಣ ಪಂಚಾಯತಿಯ 91 ಬೂತ್ ಲೆವೆಲ್ ಏಜೆಂಟರು BLA ಮತ್ತು ತಾಲೂಕಿನ ಮುಖಂಡರು ಘಟಕ ಸಮಿತಿ ಅಧ್ಯಕ್ಷರು, ಬೂತ್ ಅಧ್ಯಕ್ಷರು ಕಡ್ಡಾಯವಾಗಿ ಹಾಜರಿರಲು ವಿನಂತಿ.*
*ಶ್ರೀ ಡಿಕೆ ನಡಗೇರ* *ಅಧ್ಯಕ್ಷರು*
*ಅಧ್ಯಕ್ಷರು ತಾಲೂಕ ಬ್ಲಾಕ ಕಾಂಗ್ರೆಸ್ ಸಾಮಾಜಿಕ
ಜಾಲತಾಣ ವಿಭಾಗ ಮುಂಡಗೋಡ*
*ಶ್ರೀ ಕೃಷ್ಣ ಎಚ ಹಿರೇಹಳ್ಳಿ *ಅಧ್ಯಕ್ಷರು*
*ತಾಲೂಕ ಬ್ಲಾಕ ಕಾಂಗ್ರೆಸ ಸಮಿತಿ ಮುಂಡಗೋಡ*
ವರದಿಗಾರರು: ಬಸಯ್ಯ ತೋಟಯ್ಯನವರ
