📰
ರಾಯಚೂರ:
ಬೆಳಕಿನ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಟ್ರಸ್ಟ್ ವತಿಯಿಂದ ಆಯೋಜಿಸಲಾದ ರಾಷ್ಟ್ರಮಟ್ಟದ ಬೆಳಕು ಸಮಾರಂಭದಲ್ಲಿ ರಾಯಚೂರಿನ ಸ್ಥಳೀಯ ಲೆಕ್ಕಾಪರಿಶೋಧನ ಇಲಾಖೆ.ಹಿರಿಯ ಉಪನಿರ್ದೇಶಕರ ಕಛೇರಿ. ಹಾಗೂ ಲೆಕ್ಕಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಅಮರೇಶ ಜಂತಾಪುರ ಅವರು *”ರಾಷ್ಟ್ರಮಟ್ಟದ ಕಾಯಕ ಕಣ್ಮಣಿ ಪ್ರಶಸ್ತಿ”*ಗೆ ಭಾಜನರಾದರು.
ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ಶ್ರೀ ಅಮರೇಶರ ಶ್ರಮ, ನಿಸ್ವಾರ್ಥ ಸೇವಾಭಾವನೆ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ಗಮನಿಸಿ ಈ ಗೌರವ ಅವರನ್ನು ಕಂಗೊಳಿಸಿತು.
ಜಿಲ್ಲೆಯ ಪ್ರಗತಿಗೆ ನೀಡಿದ ಅವರ ಕೊಡುಗೆ, ಸದಾ ಸರಳ ಜೀವನ ಹಾಗೂ ನಿಷ್ಠೆಯ ಸೇವೆ ಎಲ್ಲರಿಗೂ ಮಾದರಿಯಾಗಿವೆ. ಅವರ ಸೇವಾ ನಿಲುವು ಸಮಾಜಕ್ಕೆ ಪ್ರೇರಣೆಯಾಗಲಿ ಎಂಬುದು ಎಲ್ಲರ ಆಶಯ.
ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಸಾಧನೆಗಳನ್ನು ಮಾಡಲಿ ಎಂದು ಜಿಲ್ಲಾಧಿಕಾರಿಗಳು ಹಾಗೂ ಸಹೋದ್ಯೋಗಿಗಳು ಹೃತ್ಪೂರ್ವಕ ಶುಭ ಹಾರೈಸಿದರು. 🌸🙏
ವರದಿ-ಆಂಜನಯ.ಮಟ್ಟೂರ
