ಮುಂಡಗೋಡ: ಮುಂಡಗೋಡ ವ್ಯಾಪ್ತಿಯಲ್ಲಿ ದಿನಾಂಕ 17-07-3026 ರಂದು ನಂದಿಕಟ್ಟ ಗ್ರಾಮದ ರಮೇಶ್ ಚವ್ವಾಣ್ ಎಂಬುವವರ ಮನೆಯಲ್ಲಿ ಅಕ್ರಮ ಜಿಂಕೆ ಮಾಂಸ ವಿದ್ದು ಖಚಿತ ಮಾಹಿತಿ ಮೇರೆಗೆ ಮುಂಡಗೋಡ್ ಎಸಿಎಫ್ ಆದಂತಹ ಶ್ರೀ ಈರೇಶ ಎಂ ಕಬ್ಬಿನ ಹಾಗೂ ಮುಂಡಗೋಡ್ ವಲಯ ಅರಣ್ಯಾಧಿಕಾರಿಗಳಾದ ಶ್ರೀ ಅಪ್ಪಾರಾವ್ ಕಲಶೆಟ್ಟಿ ರವರ ಮಾರ್ಗದರ್ಶನದಲ್ಲಿ ನಡೆದ್ ದಾಳಿಯಲ್ಲಿ ರಮೇಶ್ ಚವ್ವಾಣ ಸಾ । ನಾಂದಿಕಟ್ಟ ಎಂಬ ವ್ಯಕ್ತಿಯನ್ನು ಬಂಧಿಸಿ ಆತನಿಂದ 9 ಕೆಜಿ ಜಿಂಕೆ ಮಾಂಸ ವಶಪಡಿಸಿಕೊಂಡಿದ್ದು.
ಈ ಕೃತ್ಯದಲ್ಲಿ ಭಾಗವಹಿಸಿದ್ದ ಇನ್ನೊಬ್ಬ ಆರೋಪಿ ವಸಂತ್ ಕೊರವರ್ ಸಾ । ಮುಂಡಗೋಡ್ ಇವನು ತಲೆ ಮರೆಸಿಕೊಂಡಿದ್ದು ಈತನ ಬಂಧನಕ್ಕೆ ಬಲೆ ಬೀಸಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಪ್ರಕ್ರಿಯೆಗೆ ಒಳಪಡಿಸಲಾಗಿದೆ.
ಈ ದಾಳಿಯಲ್ಲಿ ಡಿ. ಆರ್. ಎಫ್. ಓ.ಗಳಾದ ಕು.ಸುನೀತಾ ಬಿ ಎಂ , ಮುತ್ತಣ್ಣ ಹುಂದ್ರಾಳ, ಬೀಟ್ ಫಾರೆಸ್ಟರ್ಗಳಾದ ಅಮಿತ ಸಣ್ಣಕ್ಕಿ, ಹೇಮಾ ಕೂಸನೂರ್, ಸಿಬ್ಬಂದಿಗಳು ಹಾಜರಿದ್ದರು.
ವರದಿಗಾರರು: ಬಸಯ್ಯ ತೋಟಯ್ಯನವರ
