ಸವದತ್ತಿ: ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಸ್ಐಆರ್ (SIR) ಕಾರ್ಯದ ಗಣತಿ ನಮೂನೆ (Enumeration Form) ವಿತರಣೆ ಹಾಗೂ ಡಿಜಿಟೈಸೇಶನ್ ಕಾರ್ಯವನ್ನು ಪೂರ್ವನಿಗದಿತ ಸಮಯಮಿತಿಯೊಳಗೆ ಯಶಸ್ವಿಯಾಗಿ ಪೂರ್ಣಗೊಳಿಸಿದ ಬಿಎಲ್ಒಗಳನ್ನು ತಹಶೀಲ್ದಾರ್ ಕಚೇರಿಯಲ್ಲಿ ಸನ್ಮಾನಿಸಲಾಯಿತು..

ಅತಿ ವೇಗವಾಗಿ ಎಸ್ಐಆರ್ (SIR) ಕಾರ್ಯದ ಗಣತಿ ನಮೂನೆ (Enumeration Form) ವಿತರಣೆ ಹಾಗೂ ಡಿಜಿಟೈಸೇಶನ್ ಕಾರ್ಯವನ್ನು ಮಾಡಿದ ಬಿಎಲ್ಒಗಳು:
1. ಶ್ರೀಮತಿ ಯು. ಎಸ್. ಮಾಣಿಕದಾರ್- ಭಾಗ ಸಂಖ್ಯೆ 156, ಸವದತ್ತಿ.
2. ಶ್ರೀ ಬಿ. ಎಸ್. ನರಗುಂದ – ಭಾಗ ಸಂಖ್ಯೆ 188, ಉಗರಗೋಳ
3. ಶ್ರೀ ನಿಂಗಪ್ಪ ಎಸ್. ಕುರಹಟ್ಟಿ- ಭಾಗ ಸಂಖ್ಯೆ 213, ಹಿರೇಕುಂಬಿ
ಇವರ ಸನ್ಮಾನ ಸಮಾರಂಭದಲ್ಲಿ ಮಾನ್ಯ ತಹಶೀಲ್ದಾರ್ ಶ್ರೀ ಮಲ್ಲಿಕಾರ್ಜುನ ಹೆಗ್ಗನ್ನವರ, ಬಿಇಒ ಶ್ರೀ ಎ. ಎ. ಖಾಜಿ, ಇಒಟಿಪಿ ಶ್ರೀ ಆನಂದ ಬಡಕುಂದ್ರಿ, ಪೌರಾಯುಕ್ತರು ಶ್ರೀ ಸಂಗನಬಸಯ್ಯ ಗದಗಿಮಠ, ಗ್ರೇಡ್-2 ತಹಶೀಲ್ದಾರ್ ಶ್ರೀ ಎಂ. ಎನ್. ಮಠದ್, ಸಿಡಿಪಿಒ (CDPO) ಶ್ರೀ ಅಮೃತ ಸಣಿಕೊಪ್ಪ, ಚುನಾವಣೆ ಶಿರಸ್ತೇದಾರ್ ಶ್ರೀ ಎಸ್. ಎಸ್. ವನಕಿ, ಚುನಾವಣಾ ಸಿಬ್ಬಂದಿ ಹಾಗೂ ಸಿಆರ್ಪಿ (CRP) ಹಾಗೂ ಬಿಆರ್ಪಿ (BRP) ಅವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಕರ್ನಾಟಕ ಇತರೆ ಕಡೆ ಕೆಲವು BLO ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಅಂತವರು ಈ ಸನ್ಮಾನಿತ BLO ಗಳನ್ನು ಪ್ರೇರಣೆಯಾಗಿ ತೆಗೆದುಕೊಂಡು ಸರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಸಂಪಾದಕರು: ರಾಮಚಂದ್ರಪ್ಪ ಪೂಜೇರ (ಚನ್ನಮ್ಮನ ಕಿತ್ತೂರು)
