ನಗರದ ಉಪ್ಪಾರಪೇಟೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಬಿ.ಮಹದೇವಸ್ವಾಮಿ ಅವರಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ.ಸಲೀಂ ಅವರು ಶುಕ್ರವಾರ ಡಿಜಿ ಪ್ರಶಂಸನಾ ಪದಕ ನೀಡಿ ಗೌರವಿಸಿದರು.



ಕೋರಮಂಗಲ ಕೆ.ಎಸ್.ಆರ್.ಪಿ. ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ, ಕರ್ತವ್ಯನಿಷ್ಠೆ ಮತ್ತು ಸಾಧನೆ ತೋರಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನೀಡಲಾಗುವ ಪ್ರಶಂಸನಾ ಪದಕವಾದ “ಡಿಜಿ ಪದಕ” ಈ ಬಾರಿ ಬಿ.ಮಹದೇವಸ್ವಾಮಿ ಅವರ ಮುಡಿಗೇರಿತು.
ವರದಿಗಾರರು: ಸೋಮಶೇಖರ ಲಮಾಣಿ
