Monday, February 9, 2026
Homeಕ್ರೀಡೆರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗಿಯಾಗಿ ರಾಜ್ಯಕ್ಕೆ ಕೀರ್ತಿತರಲು ತೆರಳಿದ ಕೆ.ಆರ್.ಪೇಟೆ. ಬಾಲೆಯರು

ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗಿಯಾಗಿ ರಾಜ್ಯಕ್ಕೆ ಕೀರ್ತಿತರಲು ತೆರಳಿದ ಕೆ.ಆರ್.ಪೇಟೆ. ಬಾಲೆಯರು

ಕೆ.ಆರ್.ಪೇಟೆ.ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕಾಶಿಮುರಕನಹಳ್ಳಿ ಗ್ರಾಮದ ಗಾನವಿ, ಬೂಕನಕೆರೆ ವಿನುತ, ನಯನ, ಪ್ರತಿಜ್ಞಾ, ಅಮೃತ ಎಸ್ ಗೌಡ, ಸೋಹನ ಆರ್ ಗೌಡ, ಮಂಡ್ಯ ಮೂಲದ ಖುಷಿ, ರುಚಿತ ಅವರು.

ಆಂಧ್ರಪ್ರದೇಶದ ಕಡಪದಲ್ಲಿ ಜನವರಿ 10 ರಿಂದ 13 ತನಕ ಮೂರು ದಿನಗಳ ಕಾಲ ನಡೆಯಲಿರುವ ರಾಷ್ಟ್ರಮಟ್ಟದ ಬಾಲಕಿಯರ ವಿಭಾಗದ ಸಬ್ ಜೂನಿಯರ್ ಸೈಕಲ್ ಪೋಲೋ ಕ್ರೀಡಾಕೂಟಕ್ಕೆ ಭಾಗವಹಿಸಲು ತೆರಳಿದ್ದಾರೆ.

ಪ್ರತಿಭಾವಂತ ಕ್ರೀಡಾಪಟುಗಳಿಗೆ ಶಾಸಕ ಹೆಚ್.ಟಿ ಮಂಜು, ಮಾಜಿ ಸಚಿವ ನಾರಾಯಣಗೌಡ, ಮಾಜಿ ಶಾಸಕರಾದ ಕೆ ಬಿ ಚಂದ್ರಶೇಖರ್, ಬಿ ಪ್ರಕಾಶ್,ಎಂ ಪುಟ್ಟಸ್ವಾಮಿಗೌಡ,ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್, ಮನ್ಮುಲ್ ನಿರ್ದೇಶಕರಾದ ಡಾಲು ರವಿ, ಎಂ ಬಿ ಹರೀಶ್,ಕಾಂಗ್ರೆಸ್ ಮುಖಂಡ ವಿಜಯ್ ರಾಮೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮೇಗೌಡ,ಬಲ್ಲೇನಹಳ್ಳಿ ರಮೇಶ್,ಕಾಶಿ ಮುರುಕನಹಳ್ಳಿ ಪ್ರೀತಮ್,ರಾಮು ಸೇರಿದಂತೆ,ಎಸ್.ಡಿ.ಎಂ.ಸಿ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಶ್ವೇತ ವೈ.ಎಂ ಪದಾಧಿಕಾರಿಗಳು, ಶಿಕ್ಷಕ ವೃಂದ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳು ಶುಭ ಕೋರಿದರು.

ಹೆಚ್ಚಿನ ಸುದ್ದಿ