Monday, February 9, 2026
Homeಜಿಲ್ಲಾ ಸುದ್ದಿಗಳುಮೈಲಾಪುರ ಜಾತ್ರೆಯ ನಿಮಿತ್ಯ ಚಿಂತನಳ್ಳಿ ಪರಿವಾರದಿಂದ ಮಹಾ ಪ್ರಸಾದ ವಿತರಣೆ.

ಮೈಲಾಪುರ ಜಾತ್ರೆಯ ನಿಮಿತ್ಯ ಚಿಂತನಳ್ಳಿ ಪರಿವಾರದಿಂದ ಮಹಾ ಪ್ರಸಾದ ವಿತರಣೆ.

ಯಾದಗಿರಿ : ಮಕರ ಸಂಕ್ರಾಂತಿ,
ಸುಕ್ಷೇತ್ರ ಮೈಲಾಪುರ ಮೈಲಾರಲಿಂಗನ ಜಾತ್ರೆಯ ನಿಮಿತ್ಯ ಮೈಲಾಪುರಕ್ಕೆ ತೆರಳುವ ಪಾದಯಾತ್ರೆ ಭಕ್ತರಿಗೆ ಯಾದಗಿರಿ ನಗರದ ಗಂಜ್ ಪ್ರದೇಶದಲ್ಲಿ ( ಮಲ್ಲಿಕಾರ್ಜುನ ಕನ್ಯಾಕುಮಾರಿ ) ದಂಪತಿಗಳಿಂದ ಸುಮಾರು 14 ವರ್ಷಗಳಿಂದ ಜನೆವರಿ 11-12-13 ತಾರೀಖಿನಂದು
ಮೂರು ದಿನಗಳ ನಿರಂತರ ಅನ್ನ ಸಂತರ್ಪಣೆ ಸೇವೆ ಮಾಡುತ್ತಾ ಬಂದಿರುವ ಚಿಂತನಳ್ಳಿ ಪಾರಿವಾರದಿಂದ ಪಾದಯಾತ್ರಿಗಳಿಗೆ ಜಾತ್ರಾ ವಿಶೇಷವಾಗಿ ದಿನದ ಇಪ್ಪನಾಲ್ಕು ಗಂಟೆಗಳ ಕಾಲ ಮಹಾ ಪ್ರಸಾದ ವಿತರಣೆ ಮಾಡಲಾಗುತ್ತಿದ್ದೂ, ದೇವರ ಕಾರ್ಯದಲ್ಲಿ ಭಕ್ತಿಯ ಪರಕಾಷ್ಟೇ ಮೆರೆದಿದ್ದಾರೆ.
ದಿ. ನರಸಪ್ಪ, ಚಂದಮ್ಮ, ಚಿಂತನಳ್ಳಿ
ಇವರ ಸ್ಮರಣಾರ್ಥವಾಗಿ ಮೈಲಾಪುರ ಮಲ್ಲಯ್ಯನ ಜಾತ್ರೆಗೆಂದು ದೂರದ ಊರುಗಳಿಂದ ಪಾದಯಾತ್ರೆ ಮೂಲಕ ತೆರಳುವ ಭಕ್ತರಿಗೆ ಚಿಂತನಳ್ಳಿ ಪಾರಿವಾರವು ಮಹಾ ಪ್ರಸಾದವನ್ನು ನೀಡುತ್ತಾ ಬಂದಿರುವುದು ಶ್ಲಾಘನಿಯ ವಾಗಿದೆ.

ಹೆಚ್ಚಿನ ಸುದ್ದಿ