ಬೆಂಗಳೂರು: ಬೆಂಗಳೂರು ನಗರದ ಸಿವಿಲ್ ನ್ಯಾಯಾಲಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಲೋಕೋಪಯೋಗಿ ಇಲಾಖೆಯ ವತಿಯಿಂದ ಅಂದಾಜು ರೂ. 10.00 ಕೋಟಿ ಅನುದಾನ ಬಿಡುಗಡೆಯಾದ ಹಿನ್ನೆಲೆಯಲ್ಲಿ, ಇಂದು ಸಿವಿಲ್ ನ್ಯಾಯಾಲಯದ ವಕೀಲ ಮಿತ್ರರು ಸಚಿವರಾದ ಮಾನ್ಯ ಸತೀಶ್ ಜಾರಕಿಹೊಳಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಅನುಮೋದಿತ ಕಾಮಗಾರಿಗಳಿಗೆ ಸಂಬಂಧಿಸಿದ ಆದೇಶ ಪತ್ರವನ್ನು ಹಸ್ತಾಂತರಿಸಲಾಯಿತು. ಜೊತೆಗೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಾರ್ವಜನಿಕ ಸೇವೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಕೆಲಹೊತ್ತು ಚರ್ಚೆ ನಡೆಸಲಾಯಿತು.
ವಕೀಲರು ಹಾಗೂ ಸಾರ್ವಜನಿಕರಿಗೆ ಮತ್ತಷ್ಟು ಉತ್ತಮ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನು ಇಡಲಾಗಿದೆ. ನ್ಯಾಯಾಲಯದ ಮೂಲಸೌಕರ್ಯವನ್ನು ಆಧುನಿಕಗೊಳಿಸಿ, ವಕೀಲರು ಹಾಗೂ ಸಾರ್ವಜನಿಕರಿಗೆ ಸುಗಮ, ಸೌಲಭ್ಯಯುಕ್ತ ಮತ್ತು ಗೌರವಯುತ ವಾತಾವರಣ ಒದಗಿಸುವುದು ನಮ್ಮ ಗುರಿ. ಈ ಕಾಮಗಾರಿಗಳು ಶೀಘ್ರ ಪೂರ್ಣಗೊಂಡು ಎಲ್ಲರಿಗೂ ಉಪಯುಕ್ತವಾಗಲಿ ಎಂಬ ಆಶಯವನ್ನು ಸಚಿವರು ವ್ಯಕ್ತಪಡಿಸಿದರು..
ಈ ಸಂದರ್ಭದಲ್ಲಿ ಶ್ರೀ ಶಶಿಕಿರಣ್ ಶೆಟ್ಟಿ, ಅಡ್ವೊಕೇಟ್ ಜನರಲ್, ಕರ್ನಾಟಕ ಹೈಕೋರ್ಟ್, ಶ್ರೀ ಸಿ. ಎಂ. ಧನಂಜಯ, ಅಧ್ಯಕ್ಷರು, ಕೆಪಿಸಿಸಿ ಕಾನೂನು ಇಲಾಖೆ, ಶ್ರೀ ಎನ್. ದಿವಾಕರ್, ಕಾರ್ಯಾಧ್ಯಕ್ಷರು, ಕೆಪಿಸಿಸಿ ಕಾನೂನು ಇಲಾಖೆ, ಶ್ರೀ ವಿವೇಕ್ ರೆಡ್ಡಿ, ಅಧ್ಯಕ್ಷರು, ಎಎಬಿ, ಶ್ರೀ ಹೆಚ್. ವಿ. ಪ್ರವೀಣ್ ಗೌಡ, ಪ್ರಧಾನ ಕಾರ್ಯದರ್ಶಿ, ಎಎಬಿ ಹಾಗೂ ಅನೇಕ ವಕೀಲ ಮಿತ್ರರು ಉಪಸ್ಥಿತರಿದ್ದರು
📌 ಅನುಮೋದಿತ ಕಾಮಗಾರಿಗಳ ವಿವರ:
- ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದ ಆವರಣದಲ್ಲಿರುವ 6ನೇ ಮಹಡಿಯಲ್ಲಿ ಫುಡ್ ಕೋರ್ಟ್ ನಿರ್ಮಿಸುವುದು, 5 Bhubanes war ವಕೀಲರ ಅಕಾಡೆಮಿ ನವೀಕರಣ 1, 2, 3, 5 ಮತ್ತು 7ನೇ ಮಹಡಿಯಲ್ಲಿ ಆಧುನಿಕ ಶೈಲಿಯ ಶೌಚಾಲಯ ನವೀಕರಣ, ಟಿ.ವಿ.ಹಾಲ್ ಸಭಾಂಗಣ ನವೀಕರಣ ಕಾಮಗಾರಿ
ವೆಚ್ಚ: 926.00 (ಲಕ್ಷಗಳು). - ಬೆಂಗಳೂರು ನಗರ ಸಿವಿಲ್ ನ್ಯಾಯಾಲಯ ಆವರಣದಲ್ಲಿ 1 ಸಂಖ್ಯೆಯ 15 ಜನ ಸಾಮರ್ಥ್ಯದ 8 ನಿಲುಗಡೆಯುಳ್ಳ, ಎಲಿವೇಟರ್ ಒದಗಿಸುವುದು, ಹೆಚ್ಚುವರಿ ವಿದ್ಯುತ್ ಸಂಪರ್ಕ ಕಲ್ಪಿಸುವುದು ಹಾಗೂ ಹಾಲಿ ಇರುವ ವಿದ್ಯುತ್ ಸ್ಥಾವರವನ್ನು ಮೇಲ್ದರ್ಜೆಗೇರಿವುದು
ವೆಚ್ಚ: 74.00 (ಲಕ್ಷಗಳು)
