ಹುಣಸಗಿ : ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕನಗಂಡನಹಳ್ಳಿ ಗ್ರಾಮದಲ್ಲಿ ಇಂದು ಮಾಳಿಂಗರಾಯ ಜಾತ್ರಾ ಮಹೋತ್ಸವ ಹಾಗೂ ಜೋಡಿ ಮದುವೆ ಕಾರ್ಯಕ್ರಮ ಧರ್ಮಸಭೆ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ವಿವಿಧ ಮಾಠಾಧೀಶರು ಹಾಗೂ ಮುಖಂಡರು
ಧರ್ಮಸಭೆಯನ್ನು ಕುರಿತು ಹಲವಾರು ಮಠಾಧೀಶರು ಮಾತನಾಡಿದರು.
ಈ ಸಂದರ್ಭದಲ್ಲಿ ಜೋಡಿ ಮದುವೆಯಾದ ವಧುಗಳಿಗೆ ಸ್ವಾಮಿಜೀಗಳು ಅರ್ಶೀವದಿಸಿದರು.
ಈ ಸಂದರ್ಭದಲ್ಲಿ ಶ್ರೀ ಅಡವಿಲಿಂಗ ಮಹಾರಾಜ ಆದಿ ಮೌನಲಿಂಗೇಶ್ವರ ದೇವಸ್ಥಾನ ವೀರಗೋಡ, ಶ್ರೀ ಶ್ರೀ ಶ್ರೀ ಸಿದ್ದರಾಮನಾಂದಪುರಿ ಕಾಗಿನೆಲೆ ಮಹಾ ಸಂಸ್ಥಾನ ತಿಂಥಣಿ ಬ್ರಿಜ್, ಶ್ರೀ ಶ್ರೀ ಶ್ರೀ ನಂದಣ್ಣಪ್ಪ ಪೂಜಾರಿ ದಕ್ಷಿಣ ಸೌರಾಷ್ಟ್ರಾಧಿಪತಿ ಶ್ರೀ ಸೋಮನಾಥ ದೇವಸ್ಥಾನ ಕಕ್ಕೇರಾ, ಬಂಡೆಪ್ಪನಹಳ್ಳಿ ಪೂಜ್ಯರು ಹಾಗೂ ಕನಗಂಡನಹಳ್ಳಿ ಗ್ರಾಮದ ಹಿರಿಯ ಮುಖಂಡರು ಮತ್ತು ಸಾರ್ವಜನಿಕರು ವಿವಿಧ ಗ್ರಾಮದ ಭಕ್ತಾದಿಗಳು ಉಪಸ್ಥಿತರಿದ್ದರು.
*ವರದಿ : ಬಸವರಾಜ ಹೊಸಮನಿ ಕಕ್ಕೇರಾ




