Monday, May 11, 2026
Homeಜಿಲ್ಲಾ ಸುದ್ದಿಗಳುಯಾದಗಿರಿಯ ಲೋಕವೇ ಬೇರೆ; ಇಲ್ಲಿ ಸರ್ಕಾರಕ್ಕಿಂತ ಪವಾಡವೇ ದೊಡ್ಡದು!"

ಯಾದಗಿರಿಯ ಲೋಕವೇ ಬೇರೆ; ಇಲ್ಲಿ ಸರ್ಕಾರಕ್ಕಿಂತ ಪವಾಡವೇ ದೊಡ್ಡದು!”

ಯಾದಗಿರಿ: ಆಧುನಿಕ ಜಗತ್ತು ಮಂಗಳ ಗ್ರಹಕ್ಕೆ ನೌಕೆ ಕಳುಹಿಸುತ್ತಿದ್ದರೆ, ನಮ್ಮ ಯಾದಗಿರಿ ಜಿಲ್ಲೆ ಮಾತ್ರ ಇಡೀ ದೇಶಕ್ಕೆ ಮಾದರಿಯಾಗುವಂತಹ ‘ಪವಾಡಗಳ ಲೋಕ’ವಾಗಿ ಬದಲಾಗಿದೆ! ಇಲ್ಲಿ ದವಾಖಾನೆಗಳಿಲ್ಲ, ಡಾಕ್ಟರ್‌ಗಳ ಅಗತ್ಯವಂತೂ ಮೊದಲೇ ಇಲ್ಲ. ಯಾಕೆಂದರೆ ನಮ್ಮನ್ನು ಕಾಯಲು ‘ದೇವ ಮಾನವರು’ ಇದ್ದಾರಲ್ಲ?

ವೈದ್ಯಕೀಯ ಲೋಕಕ್ಕೆ ಸವಾಲು ಹಾಕುವ ಪವಾಡಗಳು!

ಬಿಪಿ, ಶುಗರ್ ಅಥವಾ ಹೃದಯರೋಗವಿದ್ದರೆ ಆಸ್ಪತ್ರೆಗೆ ಹೋಗಿ ಹಣ ವ್ಯಯಿಸಬೇಡಿ. ಇಲ್ಲಿನ ದೇವ ಮಾನವರ ದರ್ಶನ ಪಡೆದರೆ ಸಾಕು, ಎಂತಹ ಕಾಯಿಲೆಯೂ ‘ಮಂತ್ರ’ಕ್ಕೆ ಮಾಯವಾಗುತ್ತದೆ. ಮಂತ್ರಿಸಿದ ತಾಯತ ಮತ್ತು ಪೂಜಾರಿಯ ಅಪ್ಪಣೆ ಇದ್ದರೆ ಸಾಕು, ಸಾವನ್ನೂ ಗೆಲ್ಲಬಹುದು ಎಂಬ ಅಚಲ ನಂಬಿಕೆ ನಮ್ಮವರದು.
ಅಭಿವೃದ್ಧಿಯ ಹೊಸ ಮಾದರಿ: ಸರ್ಕಾರಿ ಅನುದಾನವಲ್ಲ, ದೇವರ ದಯೆ!

ಗ್ರಾಮದ ರಸ್ತೆಗಳು, ಚರಂಡಿಗಳು ಮತ್ತು ಶಾಲೆಗಳ ಸ್ಥಿತಿ ಅದ್ಭುತವಾಗಿರಲು ಸರ್ಕಾರದ ಯೋಜನೆಯಲ್ಲ, ಪವಾಡಗಳೇ ಕಾರಣ. ಸರ್ಕಾರದ ನೆರವು ನಮಗೆ ಬೇಕಿಲ್ಲ, ಅಧಿಕಾರಿಗಳ ಕಿರಿಕಿರಿ ನಮಗಿಲ್ಲ. ಕಾನೂನು-ಕಟ್ಟಳೆಗಳಿಗಿಂತ ಪೂಜಾರಿಯ ಹೇಳಿಕೆಯೇ ಇಲ್ಲಿ ಸಂವಿಧಾನ!

ನೈಸರ್ಗಿಕ ಸಂಪತ್ತು ಮತ್ತು ರಾಜಕೀಯದ ‘ಜಾತಿ’ ಸಮೀಕರಣ
ನೈಸರ್ಗಿಕ ಸಂಪತ್ತನ್ನು ಹಗಲು ಹೊತ್ತಿನಲ್ಲೇ ‘ಬಳಸಿಕೊಳ್ಳುವ’ (ಕಳುವು ಮಾಡುವ) ಕಲೆ ನಮಗೆ ಸಿದ್ಧಿಸಿದೆ. ಇದನ್ನು ಸಮರ್ಥಿಸಿಕೊಳ್ಳಲು ನಮ್ಮ ಹತ್ತಿರ ಗಟ್ಟಿ ರಾಜಕಾರಣವಿದೆ.

ಎಲ್ಲಕ್ಕಿಂತ ಮಿಗಿಲಾಗಿ, ನಮಗೆ ಅಭಿವೃದ್ಧಿಗಿಂತ ಜಾತಿ ಮುಖ್ಯ. ಜಾತಿ ಮತ್ತು ನಂಬಿಕೆಯ ಹೆಸರಲ್ಲಿ ನಾವು ಸುಖವಾಗಿದ್ದೇವೆ.
ಓದುಗರ ಗಮನಕ್ಕೆ: ಈ ಸುದ್ದಿಯು ಜಿಲ್ಲೆಯ ವಾಸ್ತವ ಸ್ಥಿತಿ ಮತ್ತು ಅಂಧಶ್ರದ್ಧೆಯ ನಡುವಿನ ವ್ಯತ್ಯಾಸವನ್ನು ಕನ್ನಡಿ ಹಿಡಿಯುವ ಒಂದು ಪ್ರಯತ್ನವಾಗಿದೆ.

ಹೆಚ್ಚಿನ ಸುದ್ದಿ