ಕಲಬುರಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ಖಜೂರಿ ಗ್ರಾಮದಲ್ಲಿ ಕುರಿಗಾಯಿ ಮೇಲೆ ನಡೆದ ತಲ್ವಾರ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ (SP) ಶ್ರೀ ಅಡ್ಡೂರು ಶ್ರೀನಿವಾಸಲು ಅವರಿಗೆ ಮನವಿ ಸಲ್ಲಿಸಲಾಯಿತು.ಪ್ರಕರಣದ ಹಿನ್ನೆಲೆ:ದಿ. ೯/೨/೨೦೨೬ ರಂದು ವಿಜಯಪುರ ಜಿಲ್ಲೆಯ ಅರಕೇರಿ ಗ್ರಾಮದ ನಿವಾಸಿಯಾದ ಸಂಚಾರಿ ಕುರಿಗಾಯಿ ಪಾಂಡು ಎಂಬುವವರ ಮೇಲೆ ಖಜೂರಿ ಗ್ರಾಮದ ವ್ಯಾಪ್ತಿಯಲ್ಲಿ ತಲ್ವಾರ್ನಿಂದ ಮರಣಾಂತಿಕ ಹಲ್ಲೆ ನಡೆಸಲಾಗಿತ್ತು. ಈ ಘಟನೆಯಿಂದ ಕುರಿಗಾಯಿ ಸಮುದಾಯದಲ್ಲಿ ಆತಂಕ ಮನೆಮಾಡಿದ್ದು, ಹಲ್ಲೆಕೋರರನ್ನು ತಕ್ಷಣವೇ ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಆಗ್ರಹಿಸಲಾಗಿದೆ.ಮನವಿ ಸಲ್ಲಿಕೆ:ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಗುರುನಾಥ ಪೂಜಾರಿ ಹಾಗೂ ಕೋಮರಾಮ್ ಭೀಮ್ ಗೊಂಡ ಕುರುಬ ಸಂಘದ ಜಿಲ್ಲಾಧ್ಯಕ್ಷರು ಮತ್ತು ಕಲಬುರಗಿ, ಬೀದರ, ಯಾದಗಿರಿ ಜಿಲ್ಲೆಗಳ ಉಸ್ತುವಾರಿಗಳಾದ ಶ್ರೀ ಬಸವರಾಜ ಮದ್ರಿಕಿ ಅವರು ನೇತೃತ್ವ ವಹಿಸಿದ್ದರು.ಆಳಂದ ತಾಲ್ಲೂಕಿನ ಕುರುಬ ಸಮಾಜದ ಹಿರಿಯ ನಾಯಕರಾದ ಶ್ರೀ ಈರಣ್ಣ ಝಳಕಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘದ ತಾಲ್ಲೂಕು ಅಧ್ಯಕ್ಷರಾದ ಶ್ರೀ ಬಾಲಾಜಿ ಘೋಡಕೆ, ಶಿವಲಿಂಗ ಅಣ್ಣಾ ಯಳಸಂಗಿ, ಭಾಗೇಶ ಮರತುರ ಸೇರಿದಂತೆ ಅನೇಕ ಮುಖಂಡರು ಮತ್ತು ಕುರಿಗಾಯಿಗಳು ಉಪಸ್ಥಿತರಿದ್ದು, ಎಸ್ಪಿಯವರಿಗೆ ಘಟನೆಯ ಗಾಂಭೀರ್ಯವನ್ನು ವಿವರಿಸಿದರು.ಕುರಿಗಾಯಿಗಳ ರಕ್ಷಣೆಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು
