ವಿಜಯಪುರ: ಮುಂಬೈ-ಪುಣೆ ಬೆಂಗಳೂರು ಹೈಸ್ಪೀಡ್ ಬುಲೆಟ್ ರೈಲ್ವೆ ಕಾರಿಡಾರ್ ಯೋಜನೆ ವಿಜಯಪುರ – ವಿಜಯನಗರ ಚಿತ್ರದುರ್ಗ ತುಮಕೂರು ರೈಲ್ವೆ ಮಾರ್ಗಗಳಲ್ಲಿ ಜಾರಿಯಾಗಲಿ ಎಂದು ಮಾಜಿ ಕೃಷ್ಣಾ ನದಿ ಕಾಡ ನಿರ್ದೇಶಕರಾದ ರವಿ ಖಾನಾಪುರ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಬೆಂಗಳೂರು-ಪುಣೆ- ಮುಂಬೈ ಹೈಸ್ಪೀಡ್ ಬುಲೆಟ್
ರೈಲ್ವೆ ಕಾರಿಡಾರ್ ನ್ನು ಮಂಜೂರು ಮಾಡಬೇಕೆಂದು ಹಲವು ವರ್ಷಗಳಿಂದ ಈ ಭಾಗದ ಬೇಡಿಕೆಯಾಗಿದು ಬಜೆಟ್ ಗೂ ಮುನ್ನ ರೈಲ್ವೆ ಸಚಿವರಿಗೂ ಹಾಗೂ ಪ್ರಧಾನಮಂತ್ರಿಗಳಿಗೂ ಮನವಿ ಮಾಡಿಕೊಂಡಿದ್ದಾರೆ ಎಂದು ನೆನಪಿಸಿಕೊಂಡಿರುವ ಅವರು ವಿಜಯಪುರ ವಿಜಯನಗರ ತುಮಕೂರು ಮಾರ್ಗವಾಗಿ ಈ ಯೋಜನೆ ಪ್ರಾರಂಭಿಸಿದರೆ, ಕರ್ನಾಟಕ, ಮತ್ತು ಮಹಾರಾಷ್ಟ್ರ ರಾಜ್ಯಗಳಕ್ಕೆ ವೇಗದ ಸಂಪರ್ಕ ಸಾಧಿಸಿದಂತಾಗುತ್ತದೆ ಮಾತ್ರವಲ್ಲ ಈ ಮಾರ್ಗವೂ ಆದಾಯವೂ ಭರಪೂರವಾಗಿರುವುದರಿಂದ ಈ ಯೋಜನೆಯನ್ನು ಇದೆ ಮಾರ್ಗವಾಗಿ ಪ್ರಾರಂಭಿಸಬೇಕೆಂದು ಅವರು ಕೋರಿದ್ದಾರೆ.
2026-27ರ ಕೇಂದ್ರ ಬಜೆಟ್ ನಲ್ಲಿ ಬೆಂಗಳೂರು-ಪುಣೆ-ಮುಂಬೈ ಮತ್ತು ಚೆನ್ನೈ- ಬೆಂಗಳೂರು ನಡುವೆ ಹೈ-ಸ್ಪೀಡ್ ಬುಲೆಟ್
ರೈಲ್ವೆ ಕಾರಿಡಾರ್ ಗಳ ಮೇಲೆ ಗಮನ ಹರಿಸುವ ಮೂಲಕ ಕರ್ನಾಟಕಕ್ಕೆ ವಿಶೇಷ ಕೊಡುಗೆ ನೀಡಲಾಗಿದೆ. ಈ ಮೂಲಕ ಸಂಪರ್ಕದ ಜೊತೆ ವ್ಯಾಪಾರ ಹೆಚ್ಚಾಗಲಿದೆ. ಕೈಗಾರಿಕಾ ಮತ್ತು ತಂತ್ರಜ್ಞಾನ ಕೇಂದ್ರಗಳ ಬಲವರ್ಧನೆ ಬೆಳವಣಿಗೆ ಮತ್ತು ಹೊಸ ಉದ್ಯೋಗ ಗಳು ಸೃಷ್ಠಿಯಾಗಲಿವೆ. ಈ ಯೋಜನೆ ಮುಂದಿನ ದಿನಗಳಲ್ಲಿ ಕರ್ನಾಟಕವನ್ನು ಪ್ರಮುಖ ಆರ್ಥಿಕ ಕೇಂದ್ರಗಳೊಂದಿಗೆ ಸೇರಿಸಲಿದೆ. ಭಾರತದ ಅಭಿವೃದ್ಧಿಯನ್ನು ಬಲಪಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
