ಮುಂಡಗೋಡ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗಳಾದ ಅತ್ತಿವೇರಿ ಗೌಳಿ ಕಾಲೊನಿ, ಜೇನಮರಿ ಹಳ್ಳಿ ಹಳ್ಳಿಗಳಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಿಸಲಾಯಿತು ಮಕ್ಕಳು ಸಂವಿಧಾನ ಜಾರಿಯಾದ ಕುರಿತು ಮತ್ತು ಸಂವಿಧಾನ ಪೀಠಿಕೆ ಯಲ್ಲಿ ಅಡಕವಾದ ಸಮಾನತೆ, ಭ್ರಾತೃತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಮತೆ, ಸಹಬಾಳ್ವೆ, ಧಾಮಿ೯ಕ ಸಹಿಷ್ಣುತೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ,ಶಿಕ್ಷಕರು, ಸಹ ಶಿಕ್ಷಕರು, ಮಕ್ಕಳು, ಪಾಲಕರು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಹಾಜರಿದ್ದರು

