
ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘ ಸುರಪುರ ಶಾಖೆ ವತಿಯಿಂದ ಶ್ರೀ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಕುಲ ಕುಲ ಕುಲ ಎಂದು ಹೊಡೆದಾಡದಿರಿ ಹುಚ್ಚಪ್ಪಗಳಿರಾ
ನಿಮ್ಮ ಕುಲದ ನೆಲೆಯನ್ನು ಬಲ್ಲಿರಾ?
ಆತ್ಮ, ಜೀವ, ಗಾಳಿ, ನೀರು, ಅನ್ನ ಯಾವ ಕುಲ?
ಎಂಧು ಮನುಕುಲಕ್ಕೆ ಅತ್ಯಂತ ಶ್ರೇಷ್ಠ ಸಂದೇಶ ನೀಡಿದ ಸಂತಕವಿ, ದಾಸಶ್ರೇಷ್ಠ ಕನಕದಾಸರ ಜಯಂತಿ ಹಿನ್ನೆಲೆ ಅವರ ಭಾವಚಿತ್ರಕ್ಕೆ ಪುಷ್ಟರ್ಚಾನೆ ಮಾಡುವ ಮೂಲಕ ಗೌರವ ಸೂಚಿಸಲಾಯಿತು.
16ನೇ ಶತಮಾನದಲ್ಲಿಯೇ ಸಮಾಜದಲ್ಲಿ ಸಮಾನತೆಯ ಸಂದೇಶ ಸಾರಿದ ಕನಕದಾಸರಿಗೆ ನನ್ನ ಭಕ್ತಿಪೂರ್ವಕ ನಮನಗಳು. ಅವರು ತೋರಿದ ಸಮಾನತೆಯ ದಾರಿಯಲ್ಲಿ ನಾವೆಲ್ಲರೂ ನಡೆಯೋಣ. ಆಗಲೇ ಅವರ ಕಂಡ ಕನಸು ನನಸಾಗಲಿದೆ. ದಾಸಶ್ರೇಷ್ಠರಿಗೆ ಮತ್ತೊಮ್ಮೆ ನನ್ನ ಭಕ್ತಿಪೂರ್ವಕ ನಮನಗಳು. ಈ ಸಂದರ್ಭದಲ್ಲಿ ಭಾಗವಹಿಸಿದ ಕಾರ್ಮಿಕರ ಮುಖಂಡರು ಚಂದ್ರು ಎಲ್ಲಿಗಾರ್. ರಾಜು ಕಲಾಲ್ ಮತ್ತು ರವಿ ಚೌಹಾಣ್ ಅಮರೇಶ್ ಹೊನ್ನಾಳಿ ಮತ್ತು ಕಾಲಿದ್ ಮತ್ತು ರವಿಕುಮಾರ್ ದೇಸಾಯಿ ಮತ್ತು ಪರಮಾಣ ಕರ್ನಾಲ್ ಇನ್ನು ಅನೇಕ ಕಾರ್ಮಿಕ ಮುಖಂಡರು
ವರದಿಗಾರ : ಶಿವು ರಾಠೋಡ
