ಯಲಬುರ್ಗಾ: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ದಮ್ಮೂರ್ ಗ್ರಾಮದ ಸರಕಾರಿ ಮಾದರಿಯ ಪ್ರೌಢ ಶಾಲೆಯಲ್ಲಿ ಆವರಣದಲ್ಲಿ ಡಿಸೆಂಬರ್ 31 ರಂದು ಬೆಳಿಗ್ಗೆ 10.00 ಗಂಟೆಗೆ. ಮಕ್ಕಳ ಹಕ್ಕುಗಳ ಗ್ರಾಮ ಸಭೆ ಹಾಗೂ ವಿಶೇಷ ಚೇತನರ ಸಮನ್ವಯ ಸಭೆ ಜರುಗಿತು…
ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ಶ್ರೀ ಭೀಮಣ್ಣ ಕಮ್ಮಾರ ಅವರು ಮುಖ್ಯ ಅತಿಥಿಗಳಾಗಿ ಶ್ರೀ ರವಿ ಲಿಂಗಣ್ಣನವರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಅತಿಥಿಗಳಾದ ಹನುಮಂತಪ್ಪ ಅಜ್ಜಾರ, ಈರಪ್ಪ ರಾವಣಕಿ, ಮೌನೇಶ ಬಡಿಗೇರ, ಶರಣಯ್ಯ ಹಿರೇಮಠ ಮತ್ತು ಬಸವರಾಜ ಹಳ್ಳಿಕೇರಿ ಭಾಗವಹಿಸಿದ್ದರು..
ಕಾರ್ಯಕ್ರಮವನ್ನು ಶ್ರೀಮತಿ ಹೊಳಿಯಮ್ಮ ಹಳ್ಳಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ತುಮರಗುಂದಿ ಅವರು ಉದ್ಘಾಟಿಸಿದರು.
ಪ್ರಸ್ತಾವಿಕ ನುಡಿಯನ್ನು ತುಂಬುಗುದ್ದಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ರವಿ ಲಿಂಗಣ್ಣವರ ಮಾತನಾಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀ ಎಫ್ ಎಂ ಕಳ್ಳಿ ಸರ್ ಅವರು ಮಾತನಾಡಿ,
ಮಕ್ಕಳಿಗೆ ಬೇಕಾದ ಪಠ್ಯಪುಸ್ತಕ ಇದರ ಜೊತೆಗೆ ಶಾಲೆ ಆವರಣದಲ್ಲಿ ಸ್ವಚ್ಛತೆ ಮತ್ತು ಶೌಚಾಲಯಗಳು, ಕುಡಿಯುವ ನೀರುಗಳು ಇದರ ಜೊತೆಗೆ ಗುರುಗಳು ಹೇಳಿಕೊಡುವ ವಿದ್ಯೆಗಳಿಂದ ಬಹಳ ಮುಖ್ಯ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಊರಿನ ಹಿರಿಯರು, ಮುಖಂಡರುಗಳು ಮತ್ತು ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು…
ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಶಾಲೆಯ ಶಿಕ್ಷಕರಾದ ಶ್ರೀ ಲಕ್ಷ್ಮಣ ಚಲವಾದಿ ಸ್ವಾಗತ ಮಾಡುವುದರ ಮೂಲಕ ವೇದಿಕೆಗೆ ಗಣ್ಯರನ್ನು ಬರಮಾಡಿಕೊಂಡರೆ. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕರಾದ ಶ್ರೀ ವಿರುಪಾಕ್ಷಪ್ಪ ಶಿವರೆಡ್ಡಿ ನೇರವೆರಿಸಿದರು. ವಂದನಾರ್ಪಣೆ ಶ್ರೀ ನಬೀಬ್ ಸಾಬ್ ಗುರಿಕಾರ ಮಾಡಿದರು.

ವರದಿಗಾರರು: ಶಶಿಧರ್ ಹೊಸಮನಿ (ಯಲಬುರ್ಗಾ)
