ಶಿಗ್ಗಾಂವ: ಜಾನಪದ ವಿಶ್ವವಿದ್ಯಾಲಯ ಗೊಟಗೋಡಿ: ಜಗತ್ತು ಕಂಡ ಶ್ರೇಷ್ಠ ಚಲನಚಿತ್ರ ನಿರ್ದೇಶಕ, ನಟ ಕಡು ಬಡತನದಲ್ಲಿ ಬೆಳೆದ ಚಾರ್ಲಿ ಚಾಂಪ್ಲಿನ್ ಜನರ ಮೆಚ್ಚುಗೆ ಪಡೆದ ಮಹಾನ್ ಕಲಾವಿದರಾಗಿದ್ದರು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ.ವೆಂಕನಗೌಡ ಪಾಟೀಲ ಅವರು ಹೇಳಿದರು.
ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪರದೆ ಸಿನಿಮಾ ವೇದಿಕೆಯಿಂದ ಸೋಮವಾರ ಮಲ್ಲಿಗೆದಂಡೆ ಸಭಾಂಗಣದಲ್ಲಿ ಎರಡು ದಿನ ನಡೆಯಲಿರುವ ಚಾರ್ಲಿ ನೆನಪಿನಲ್ಲಿ ಚಿತ್ರೋತ್ಸವ ಮತ್ತು ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎರಡನೇ ಮಹಾ ಯುದ್ಧದ ಭೀಕರತೆಯ ಸಂದರ್ಭದಲ್ಲಿ ಬಂದ ಚಾರ್ಲಿ ಚಾಂಪ್ಲಿನ್ ನಟನೆಯ ದಿ ಗ್ರೇಟ್ ಡಿಕ್ಟೇಟರ್ ಸಿನಿಮಾ ಹಿಟ್ಲರ್ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ. ಇದೆ ರೀತಿಯಲ್ಲಿ ಅವರು ಹಲವಾರು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ, ನಟಿಸಿದ್ದಾರೆ ಚಾರ್ಲಿ ಚಾಂಪ್ಲಿನ್ ಅವರು ಅಗಲಿ 48ನೇ ವರ್ಷದ ಈ ಸಂದರ್ಭದಲ್ಲಿ ಅವರ ನೆನಪಿಗಾಗಿ ವಿದ್ಯಾರ್ಥಿಗಳ ಮಧ್ಯದಲ್ಲಿ ಸದಭಿರುಚಿ ಸಿನಿಮಾ ಪ್ರದರ್ಶನಗೊಳ್ಳುತ್ತಿರುವುದು ಖುಷಿ ವಿಚಾರ ಎಂದರು.
ಹಿರಿಯ ಸಂಶೋಧನಾಧಿಕಾರಿಗಳಾದ ಡಾ. ಕೆ ಪ್ರೇಮಕುಮಾರ್ ಅವರು ಮಾತನಾಡಿ, ಚಾರ್ಲಿ ಚಾಂಪ್ಲಿನ್ ಮಾನವೀಯತೆ ಮತ್ತು ಪ್ರಜಾಪ್ರಭುತ್ವದ ಪ್ರತಿಪಾದಕ ಶ್ರೇಷ್ಠ ಕಲಾವಿದ ಹಾಗೂ ದಿಟ್ಟ ನಟರಾಗಿದ್ದರು ಅವರನ್ನು ಈ ಸಂದರ್ಭದಲ್ಲಿ ನೆನೆಯುವುದು ಸೂಕ್ತವಾಗಿದೆ ಎಂದರು.
‘ದಿ ಗ್ರೇಟ್ ಡಿಕ್ಟೇಟರ್’ ಸಿನಿಮಾ ಪ್ರದರ್ಶನದ ನಂತರ ವಿದ್ಯಾರ್ಥಿಗಳು ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು. ಈ ಸಂದರ್ಭದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು
ಕೋಟ್ : ಚಾರ್ಲಿ ಚಾಂಪ್ಲಿನ್ ಚಲನಚಿತ್ರಗಳು ಮಕ್ಕಳಿಗೆ ಮಾತ್ರವಲ್ಲದೆ ಸಮಾಜದ ಎಲ್ಲಾ ವಯೋಮಾನದ ಜನರಿಗೆ ಪ್ರಜ್ಞೆ ಹಾಗೂ ಮಾನವೀಯತೆ ಮೌಲ್ಯಗಳನ್ನು ಬಿತ್ತಿದವರು ಅವರನ್ನು ಸ್ಮರಿಸಿರುವುದು ಸೂಕ್ತವಾಗಿದೆ ಜನರ ಮನಸಲ್ಲಿ ಅವರು ಇನ್ನೂ ನೆಲೆ ನಿಂತಿದ್ದಾರೆ ಎಂದು ಡಾ.ಕೆ ಪ್ರೇಮಕುಮಾರ್ ಹಿರಿಯ ಸಂಶೋಧನಾಧಿಕಾರಿಗಳು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅವರು ತಿಳಿಸಿದರು.
ಸಂಪಾದಕರು: ರಾಮಚಂದ್ರಪ್ಪ ಪೂಜೇರ
