ಬಾಗಲಕೋಟೆ. 4
ಬಾಗಲಕೋಟೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರ ಪರವಾಗಿ ಆಹಾರ ಸಚಿವರಾದ ಕೆ.ಹೆಚ್. ಮುನಿಯಪ್ಪ ರವರ ನೇತೃತ್ವದಲ್ಲಿ ಮಾಜಿ ಸಚಿವ ಹೆಚ್. ಆಂಜನೇಯ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಇವರು ಬಿರುಸಿನ ಪ್ರಚಾರದೊಂದಿಗೆ ಸುಮಾರು 20 ಹಳ್ಳಿಗಳಲ್ಲಿ ಮತಯಾಚನೆ ನಡೆಸಿದರು
ಸಮುದಾಯದ ಕಾಂಗ್ರೆಸ್ನ ಮತದಾರರು ನೀವೆಲ್ಲರೂ ಮತ ನೀಡುವ ಮೂಲಕ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮುಖಂಡರಲ್ಲಿ ವಿನಂತಿಸಿದರು ಇಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರೊಂದಿಗೆ ಚುನಾವಣೆಯ ವಿಚಾರಗಳ ಕುರಿತು ಚರ್ಚಿಸಿ
ನಾಳೆ ನಡೆಯಲಿರುವ ಬಾಬು ಜಗಜೀವನರಾಂ ಜಯಂತಿಯಲ್ಲಿ ಭಾಗವಹಿಸಲು ಸಚಿವ ಮುನಿಯಪ್ಪನವರು ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹೆಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹಾಗೂ ಮುಖಂಡರು ಉಪಸ್ಥಿತರಿದ್ದರು.
