1. ತೋಟದ ಸ್ವಚ್ಛತೆ

ಅಡಿಕೆ ತೋಟದ ಮುಂಗಾರು ಪೂರ್ವ ಸಿದ್ಧತೆಗಳು
ಮಳೆಗಾಲದಲ್ಲಿ ರೋಗ, ನೀರು ನಿಲ್ಲುವುದು ತಪ್ಪಿಸಲು ಮೇ-ಜೂನ್ ತಿಂಗಳಲ್ಲಿ ಈ ಕೆಲಸಗಳನ್ನು ಮಾಡಿ ಮುಗಿಸಬೇಕೆಂದು ರೈತರಲ್ಲಿ ವಿನಂತಿಸಲಾಗಿದೆ.
- ಒಣಗಿದ, ರೋಗ ತಗುಲಿದ ಗರಿಗಳು, ಕಾಯಿಗಳನ್ನು ಕಿತ್ತು ಸುಟ್ಟುಹಾಕಿ.
- ಬುಡದ ಸುತ್ತ 2-3 ಅಡಿ ವರೆಗೆ ಕಳೆ ತೆಗೆದು ಮಣ್ಣು ಸಡಿಲಗೊಳಿಸಿ.
- ಕಳೆದ ವರ್ಷದ ಎಲ್ಲ ಸೊಪ್ಪು-ಕಸವನ್ನು ಆಚೆ ಹಾಕಿ. ಇದು ಕೊಳೆ ರೋಗಕ್ಕೆ ಆಹಾರ ಆಗುತ್ತದೆ.
2. ಬೇಸಾಯ ಮತ್ತು ಗೊಬ್ಬರ
- ಬುಡಕ್ಕೆ ಮಣ್ಣು ಏರಿಸಿ ದಿಂಡು ಮಾಡಿ. ಇದರಿಂದ ಬೇರಿಗೆ ಗಾಳಿ ಸಿಗುತ್ತದೆ ಮತ್ತು ನೀರು ನಿಲ್ಲುವುದಿಲ್ಲ.
- ಪ್ರತಿ ಮರಕ್ಕೆ 10-15 ಕೆಜಿ ಕೊಟ್ಟಿಗೆ ಗೊಬ್ಬರ + 250 ಗ್ರಾಂ ಬೇವು ಹಿಂಡಿ + 1 ಕೆಜಿ ಸುಣ್ಣ ಹಾಕಿ ಮಣ್ಣು ಮುಚ್ಚಿ.
- ರಾಸಾಯನಿಕ ಗೊಬ್ಬರ ಕೊಡುವುದಾದರೆ: 100:40:140 ಗ್ರಾಂ NPK/ಮರಕ್ಕೆ ಮೇ ತಿಂಗಳಲ್ಲಿ ಹಾಕಿ.
3. ರೋಗ-ಕೀಟ ನಿಯಂತ್ರಣ
- ಕೊಳೆ ರೋಗ/ಮಹಾಳಿ: 1% ಬೋರ್ಡೋ ದ್ರಾವಣ ಅಥವಾ Metalaxyl MZ 2 ಗ್ರಾಂ/ಲೀಟರ್ ನೀರಿನಲ್ಲಿ ಕಲಸಿ ಸುಳಿಗೆ ಮತ್ತು ಕಾಯಿಗಳಿಗೆ ಸಿಂಪಡಿಸಿ. ಮೊದಲ ಸಿಂಪರಣೆ ಮೇ ಕೊನೆಗೆ, ಎರಡನೆಯದು ಜೂನ್-ಜುಲೈನಲ್ಲಿ.
- ಬುಡ ಕೊಳೆತ: ಬುಡಕ್ಕೆ 1% ಬೋರ್ಡೋ ಲೇಪನ ಮಾಡಿ.
- ಹಳದಿ ಎಲೆ ರೋಗ ಇದ್ದರೆ ಬೇರಿನಿಂದ 1 ಮೀಟರ್ ದೂರ 30 ಸೆಂ.ಮೀ ಆಳದ ಕಾಲುವೆ ತೆಗೆದು Trichoderma 50 ಗ್ರಾಂ + 5 ಕೆಜಿ ಸಗಣಿ ಮಿಶ್ರಣ ಹಾಕಿ.
4. ನೀರು ಬಸಿ ವ್ಯವಸ್ಥೆ
- ತೋಟದಲ್ಲಿ ನೀರು ನಿಲ್ಲದಂತೆ 2-3 ಅಡಿ ಆಳದ ಬಸಿ ಕಾಲುವೆಗಳನ್ನು ತೆಗೆಯಿರಿ.
- ಮುಖ್ಯ ಕಾಲುವೆಗೆ ಎಲ್ಲ ಉಪ-ಕಾಲುವೆಗಳನ್ನು ಜೋಡಿಸಿ ನೀರು ಹೊರಗೆ ಹೋಗುವಂತೆ ಮಾಡಿ.
ಕೊನೆಯ 2 ವಾರದಲ್ಲಿ ಮಾಡಬೇಕಾದ್ದು: ಹವಾಮಾನ ವರದಿ ನೋಡಿಕೊಂಡು, ಮೊದಲ ಮಳೆಗೆ ಮುನ್ನವೇ ಎಲ್ಲ ಸಿಂಪರಣೆ ಮುಗಿಸಿರಿ…
ಶ್ರೀ ಕೃಷ್ಣಾ ಟಿ ಕುಳ್ಳೂರ
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಮುಂಡಗೋಡ
