ರಾಯಬಾಗ: ಡಿಕೆ ಶಿವಕುಮಾರ ಅವರ ನೂತನ ಸಚಿವ ಸಂಪುಟದಲ್ಲಿ ಯಮಕಣಮರಡಿ ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಭೀಮ್ಸ್ ನಿರ್ದೇಶಕ ರಾಜು ಶಿರಗಾಂವೆ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುಭವಿ ಹಾಗೂ ಮುತ್ಸದ್ಧಿ ರಾಜಕಾರಣಿಯಾದ ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರ ಸಂಪುಟದಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಸಚಿವ ಸ್ಥಾನ ನೀಡಬೇಕು. ರಾಜ್ಯದಲ್ಲಿ ತನ್ನದೇ ಆದ ಬಲಿಷ್ಠ ಬಳಗ ಹೊಂದಿದ್ದಾರೆ. ಅಲ್ಲದೇ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಸರಕಾರ ತಕ್ಷಣ ಇವರಿಗೆ ಸ್ಥಾನಗಳನ್ನು ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಸಭೆ ಸೇರಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಂತರ ಡಾ. ಹಫೀಜ್ ಮುಬಾರಕ ಡೋಂಗರೆ ಮಾತನಾಡಿ, ಶಾಸಕರಾದ ಸತೀಶ್ ಜಾರಕಿಹೊಳಿ ಹಾಗೂ ಬೆಳಗಾವಿಯ ಶಾಸಕರಾದ ಅಸೀಪ್(ರಾಜು) ಸೇಠ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಇರಫಾನ್ ತರಡೆ, ಶಪಿಉಲ್ಲಾ ಗೋಲಂದಾಜ್, ಸಾಗರ ಝಂಡೆನವರ, ನ್ಯಾ.ಬಂದೆನವಾಜ್ ಮುಲ್ಲಾ, ಇಮಿತಿಯಾಜ್ ಮುಲ್ಲಾ, ಅರಬಾಜ್ ಜಮಾದಾರ, ಮುಸ್ತಾಕ ರಶೀದ್ ಮುಲ್ಲಾ, ಹಫೀಜ್ ಪಹೀಂ ಸೇರಿದಂತೆ ಜಾರಕಿಹೊಳಿ ಹಾಗೂ ಅಸೀಫ್ ಸೇಠ್ ಅಭಿಮಾನಿಗಳು ಉಪಸ್ಥಿತರಿದ್ದರು.
