Monday, February 9, 2026
Homeಜಿಲ್ಲಾ ಸುದ್ದಿಗಳುಧರ್ಮಸ್ಥಳ ಗ್ರಾಮಭಿರುದ್ಧಿ ಸ್ವಸಹಾಯ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮ ಮಾಡಲಾಯಿತು

ಧರ್ಮಸ್ಥಳ ಗ್ರಾಮಭಿರುದ್ಧಿ ಸ್ವಸಹಾಯ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮ ಮಾಡಲಾಯಿತು

ಮುದ್ದೇಬಿಹಾಳ್ ವಲಯದ್ ವಿದ್ಯಾನಗರ ಕಾರ್ಯಕ್ಷೆತ್ರದಲ್ಲಿ ಚೈತನ್ಯ ಸ್ವಸಹಾಯ ಗುಂಪಿನ 10 ನೆ ವರ್ಷದ ದಸಮಾನೋತ್ಸವ ಅಂಗವಾಗಿ ವಾರ್ಷಿಕೋತ್ಸವ ಕಾರ್ಯಕ್ರಮ ಮಾಡಿದರು

ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿ ಶಿವಾನಂದ ಪಿ ಅವರು ಭಾಗವಹಿಸಿ ಮುದ್ದೇಬಿಹಾಳ್ ತಾಲೂಕಿಗೆ ಧರ್ಮಸ್ಥಳ ಯೋಜನೆ ಬಂದು 10 ವರ್ಷ ಆಗಿದ್ದು ಸ್ವ ಸಹಾಯ್ ಸಂಘದ ಸದಸ್ಯರು ಸಂಘ ರಚನೆ ಮಾಡಿಕೊಂಡು ಸಾಲ ಪಡೆದು ಅನೇಕ ಅಭಿರುದ್ದಿ ಕಾರ್ಯಗಳನ್ನು ಮಾಡಿಕೊಂಡು ಸ್ವಾವಲಂಬನೆ ಜೀವನ್ ನಡೆಸುತ್ತಿದ್ದು ತಾವುಗಳು ಮತ್ತಷ್ಟು ಅಭಿವೃದ್ಧಿ ಹೊಂದಬೇಕು ಎಂದು ಹೇಳಿ ಯೋಜನೆ ಕಾರ್ಯಕ್ರಮಗಳ ಬಗ್ಗೆ ಹಾಗೂ ಯೋಜನೆಯಿಂದ ಸದಸ್ಯರುಗಳಿಗೆ ಹಾಗೂ ಗ್ರಾಮಗಳಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿ ಶುಭ ಹಾರೈಸಿದರು

ತಂಡದ ಸದಸ್ಯರಾಧ ಗಿರಿಜಾ ರವರು ನಾವು ಸಂಘ ರಚನೆ ಮಾಡಿಕೊಂಡು ಇದುವರೆಗೆ 12 ಜನ ಸದಸ್ಯರು ಸೇರಿ ವಿವಿಧ ಸ್ವ ಉದ್ಯೋಗ ಮಕ್ಕಳ್ ಶಿಕ್ಷಣಕ್ಕೆ ಮನೆ ರಚನೆ ಕೃಷಿಗೆ ಅಂತಾ ಇಲ್ಲಿವರೆಗೆ 16 ಲಕ್ಷದ ಸಾಲದ ವ್ಯವಹಾರ ಮಾಡುತ್ತಿದ್ದೇವೆ ಸಂಘದಲ್ಲಿ ಸೇರಿದ್ಮೇಲೆ ನಮಗೆ ಸ್ವಂತ್ ಉದ್ಯೋಗ ಮಾಡಲು ಅವಕಾಶ ಸಿಕ್ಕಿದೆ ಇದಕ್ಕೆ ಪೂಜ್ಯ ಖಾವಂದರಿಗೆ ಅಭಿನಂದನೆಗಳು ತಿಳಿಸುತೇವಿ ಎಂದರು

ಕಾರ್ಯಕ್ರಮದಲ್ಲಿ ಯೋಜನೆ ಅಧಿಕಾರಿಗಳನ್ನು. ತಂಡದ ಹಳೆಯ ಪ್ರತಿನಿದಿಗಳಾದ ಶ್ರೀಮತಿ ಅಮರಮ್ಮ ಹಾಗೂ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರು ಆದ್ ಶ್ರೀಮತಿ ವಿಜಯ್ಲಕ್ಸ್ಮಿ ಬುದ್ಯಾಳಮಟ್ ಹಾಗೂ ಹಿರಿಯ ಶಿಕ್ಷಕರಾದ ಸರೋಜಮ್ಮ ಶಿವಯೋಗಿಮಟ್ ರವರನ್ನು ಹಾಗೂ ತಂಡದ ಎಲ್ಲಾ ಸದಸ್ಯರನ್ನು ಗುಂಪ್ಪಿನ್ ಸದಸ್ಯರು ಗುರುತಿಸಿ ಗೌರವಿಸಿದರು

ಕಾರ್ಯಕ್ರಮದಲ್ಲಿ ಮೇಲ್ವಿಚಾರಕರಾಧ ನಾಗೇಶ್ ಎಸ್ ಕೆ.ದೇವೇಂದ್ರಪ್ಪ ಹಾಗೂ ಸೇವಾಪ್ರತಿನಿಧಿ ಶ್ರೀಮತಿ ವಿಜಯಲಕ್ಸ್ಮಿ ಮತ್ತು ತಂಡದ ಸದಸ್ಯರು ಭಾಗವಹಿಸಿದರು

ಹೆಚ್ಚಿನ ಸುದ್ದಿ